ಕೆ.ಕೆ.ಆರ್ ಮೂವೀ ಹೌಸ್ ಲಾಂಛನದಲ್ಲಿ ಕಿರಣ್ಕುಮಾರ್ ರೆಡ್ಡಿ ಅವರು ನಿರ್ಮಿಸುತ್ತಿರುವ ‘ಅಲೆ’ ಚಿತ್ರಕ್ಕಾಗಿ ಜಯಂತಕಾಯ್ಕಿಣಿ ಬರೆದಿರುವ ‘ಅತೀ ಆತುರ ನಿನ್ನ ನೋಡಲು ಅತೀ ಕಾತುರ ಎಲ್ಲವ ಹೇಳಲು ಅತೀ ಸಂತಸ ಸುಮ್ಮನೆ ಸೋಲಲು’ ಎಂಬ ಹಾಡಿನ ಚಿತ್ರೀಕರಣ ಮನಾಲಿಯಲ್ಲಿ ನಡೆದಿದೆ. ತನುಷ್ ಹಾಗೂ ಹರ್ಷಿಕಾಪೂಣಚ್ಛ ಅಭಿನಯಿಸಿದ ಈ ಹಾಡಿಗೆ ಕಂಬಿರಾಜು ನೃತ್ಯ ನಿರ್ದೇಶನ ಮಾಡಿದ್ದಾರೆ. ಸೋನುನಿಗಂ ಹಾಡಿರುವ ಈ ಹಾಡಿನಲ್ಲಿ ಹೆಚ್ಚುಸಾರಿ ಅತೀ ಎಂಬ ಪದ ಬಳಕೆಯಾಗಿರುವುದು ವಿಶೇಷ.
ಆದತ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿಜಯ್ ಭರಮಸಾಗರ ಸಂಭಾಷಣೆ ಬರೆದಿದ್ದಾರೆ. ಎ.ಕೆ.ಎನ್ ಸೆಬಾಸ್ಟೇನ್ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ನೀಡಿದ್ದಾರೆ. ಕೆ. ಎಂ.ಪ್ರಕಾಶ್ ಸಂಕಲನ, ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ ಹಾಗೂ ಬಾಬುಖಾನ್ ಕಲಾ ನಿರ್ದೇಶನ ‘ಅಲೆ’ ಚಿತ್ರಕ್ಕಿದೆ.